ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎನ್ನುವುದಕ್ಕೆ ಹಂಪಿ ವಿವಿ ಕುಲಪತಿ ಡಾ.ಮಲ್ಲಿಕಾ ಘಂಟಿ ಅವರ ಹೇಳಿಕೆ ಸಾಕ್ಷ್ಯ ಒದಗಿಸಿದಂತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಗ್ರೇಡ್–2 ತಹಶೀಲ್ದಾರ್ ಎಸ್.ಎಸ್. ನಾಯ್ಕಲಮಠ ಅವರಿಗೆ ಮನವಿ ಸಲ್ಲಿಸಿದರು. ತಾಲ್ಲೂಕು ಸಂಚಾಲಕ ವಿಜಯ ಕುಮಾರ ಶಿರೂರ, ಕೆಂಚಪ್ಪ ಬಿರಾದಾರ, ರಾಯಪ್ಪ ಪೂಜಾರಿ, ಪ್ರಸಾದ ಮಾಳಿ, ದೀಪಾ ಪಾಲಬಾವಿ, ಪವಿತ್ರಾ ಸಾದಾಪ್ಪ ಗೋಳ ಇದ್ದರು.