ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಬಹುತೇಕ ಮುಖಂಡರು ಮಾತನಾಡಿ, ಒಣ ಬೇಸಾಯ ಪ್ರದೇಶಕ್ಕೆ ನವಲಿ ಸೇರಿಸುವಂತೆ ಅವರು ಒತ್ತಾಯಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಗೌರಮ್ಮ ಜಡಿಯಪ್ಪ ಮಕ್ಕುಂದಿ, ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಮರೇಶ ಮುಂಡರಗಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸವರಾಜ ಸಂಕನಾಳ, ಸದಸ್ಯರಾದ ರಾಮಾನಾಯ್ಕ್, ವೀರೇಶ ಭಜಂತ್ರಿ, ಬೀರಪ್ಪ ಬಂಕದಮನಿ, ಯಂಕಪ್ಪ ದೇವರಗುಡಿ, ದುರಗಪ್ಪ ಭೋವಿ, ಬೀರಪ್ಪ ಉದ್ಯಾಳ, ಮಾಜಿ ಅಧ್ಯಕ್ಷ ಪ್ಯಾಟೆಪ್ಪ ನಾಯಕ, ಪ್ರಮುಖರಾದ ಹುಸೇನಪೀರ ಕನಕಗಿರಿ, ಮಂಜುನಾಥ, ವೀರೇಶ ನವಲಿ, ಲಿಂಗಪ್ಪ, ಹಿರೇಭೋಗಪ್ಪ, ಜಡಿಯಪ್ಪ ಸಂಕನಾಳ ಸೇರಿದಂತೆ ಆದಾಪುರ, ಸಂಕನಾಳ, ಈಚನಾಳ, ಉದ್ಯಾಳ, ಕ್ಯಾರಿಹಾಳ, ನವಲಿ, ಮುಖಂಡರು ಭಾಗವಹಿಸಿದ್ದರು.