ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನ ಬಾಗಿಲು ತಟ್ಟುತ್ತಿದ್ದೇನೆ ನಿಜಗುಣಾನಂದ ಶ್ರೀ

Last Updated 19 ಸೆಪ್ಟೆಂಬರ್ 2017, 6:03 IST
ಅಕ್ಷರ ಗಾತ್ರ

ಕೊಪ್ಪಳ: 'ನಾನು ಪ್ರತಿದಿನವೂ ಸಾವಿನ ಬಾಗಿಲನ್ನು ತಟ್ಟುತ್ತಲೇ ಇದ್ದೇನೆ' ಎಂದು ನಿಜಗುಣಾನಂದ ಸ್ವಾಮೀಜಿ ತಮ್ಮ ಭಾಷಣದಲ್ಲಿ ಹೇಳಿದರು. ಸಮಾರಂಭದ ಬಳಿಕ ಸುದ್ದಿಗಾರರು ಮಾತನಾಡಿದಾಗ 'ವೈಚಾರಿಕ ಹಿನ್ನೆಲೆಯಲ್ಲಿ ನನ್ನನ್ನು ದ್ವೇಷಿಸುವವರು ಸದಾ ಇದ್ದಾರೆ. ಈ ಅರ್ಥದಲ್ಲಿ ಸಾವಿನ ಬಾಗಿಲು ತಟ್ಟುತ್ತಿದ್ದೇನೆ. ಹಾಗೆಂದು ನನಗೆ ಯಾರಿಂದಲೂ ಜೀವ ಬೆದರಿಕೆಯ ಕರೆ ಬಂದಿಲ್ಲ. ಭದ್ರತೆಯನ್ನೂ ಕೇಳಿಲ್ಲ' ಎಂದು ಸ್ಪಷ್ಟಪಡಿಸಿದರು

ಗೌರಿ ಲಂಕೇಶ್‌, ಎಂ.ಎಂ. ಕಲಬುರ್ಗಿ ಅವರ ಹಂತಕರ ಪತ್ತೆ ಶೀಘ್ರ ಆಗಬೇಕು ಎಂದು ಒತ್ತಾಯಿಸಿದರು. ‘ವೀರಶೈವ ಮತ್ತು ಲಿಂಗಾಯತ ಯಾವತ್ತಿಗೂ ಒಂದಾಗಲು ಸಾಧ್ಯವಿಲ್ಲ. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕುರಿತು ಹೋರಾಟ ಮುಂದುವರಿಯಲಿದೆ. ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT