ಕೆ.ಆರ್.ಪೇಟೆ: ಪಟ್ಟಣದ ಬಸವೇಶ್ವರ ನಗರ ಬಡಾವಣೆಯಲ್ಲಿ ಒಳಚರಂಡಿಗೆ ಅಳವಡಿಸಿರುವ ಮ್ಯಾನ್ ಹೋಲ್ ಗಳು ಒಡೆದು ಕಲುಷಿತ ನೀರು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ಸಾರ್ವಜನಿಕರಿಗೆ ಓಡಾಡಲು ಕಿರಕಿರಿ ಉಂಟಾಗಿದೆ.
ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಸರಿಯಾಗಿ ನಡೆಯದೆ ಹದಗೆಟ್ಟಿರುವುದರಿಂದ ಮ್ಯಾನ್ ಹೋಲ್ ಗಳಲ್ಲಿ ನೀರು ಕಟ್ಟಿಕೊಂಡು ಪೈಪ್ ಲೈನ್ನಲ್ಲಿ ನೀರು ಸರಾಗವಾಗಿ ಹೋಗಲಾರದೆ ಹೊರಬರುತ್ತಿದೆ. ಇದರಿಂದ ಬಡಾವಣೆಯ ನಾಗರಿಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ.
ಮಳೆಗಾಲವಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ. ರೋಗಗಳು ಹರಡುವ ಮುನ್ನ ಪುರಸಭೆ ತಕ್ಷಣ ಇತ್ತ ಗಮನಹರಿಸಿ ಒಡೆದಿರುವ ಮ್ಯಾನ್ ಹೋಲ್ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ. ಎಚ್.ಆರ್.ಲೋಕೇಶ್ ಹಾಗೂ ಜಯನಗರ ಬಡಾವಣೆಯ ನಿವಾಸಿಗಳು