ಹೊಸಕೆರೆ ಬೆಸ್ಕಾಂ ಬಳಿ ದಿಢೀರನೆ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಸೋಮಲಾಪುರ, ಹಿಡಕನಹಳ್ಳಿ, ಬೆಟ್ಟದಹಳ್ಳಿ, ಶಿವನೇಹಳ್ಳಿ, ಅರೇಹಳ್ಳಿ, ಮತ್ತೀಕೆರೆ, ಜಕ್ಕನಹಳ್ಳಿ, ಹೊಸಕೆರೆ, ಅಳಿಲುಘಟ್ಟದಿಂದ ಬಂದಿದ್ದ ರೈತರು, ‘ವಿದ್ಯುತ್ ನೀಡುವಲ್ಲಿ ಬೆಸ್ಕಾಂ ನವರು ತಾರತಮ್ಯ ನಿಲ್ಲಿಸಬೇಕು, ಎಲ್ಲಾಕಡೆ ವಿದ್ಯುತ್ ನೀಡುವಂತೆ ಹೊಸಹಳ್ಳಿ, ಶಿವನೇಹಳ್ಳಿ, ಮತ್ತೀಕೆರೆ ಗ್ರಾಮಗಳಿಗೇಕೆ ನೀಡುತ್ತಿಲ್ಲ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸಮಸ್ಯೆ ಬಗೆಹರಿಸುವವರೆಗೂ ಮುಷ್ಕರ ಕೈಬಿಡುವುದಿಲ್ಲ’ ಎಂದು ಸಂಜೆ 6 ವರಗೆ ಅಲ್ಲೇ ಕುಳಿತು ಧರಣಿ ನಡೆಸಿದರು.