ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಟಿ. ಬಸಣ್ಣ ಮಾತನಾಡಿ, ತಾಲ್ಲೂಕಿನಲ್ಲಿ 2 ಸಾವಿರ ಕ್ವಿಂಟಲ್ ಕಡಲೆ ಬೀಜ ಬೇಡಿಕೆ ಇದೆ. ಈಗ 1500 ಕ್ವಿಂಟಲ್ ದಾಸ್ತಾನು ಇದೆ. ಅಗತ್ಯವಿದ್ದಲ್ಲಿ ಮತ್ತಷ್ಟು ಬೀಜ ವಿತರಣೆ ಮಾಡಲಾಗುವುದು. ಮಾಲ್ದಂಡಿ ಬಿಳಿಜೋಳ ಬೀಜ ಸಹ ವಿತರಿಸಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ತಾಲ್ಲೂಕು ಪಂಯ್ತಿ ಸದಸ್ಯ ಬಿದರಕೆರೆ ಬಸವರಾಜ್, ಕೃಷಿ ಅಧಿಕಾರಿ ಉಮೇಶ್, ಮುಖಂಡ ರಾಜು ಹಾಜರಿದ್ದರು.