ಇದಕ್ಕೆ ಸಂಬಂಧಿಸಿದಂತೆ ಶಾಲೆಯ ನಿಯೋಜಿತ ಮುಖ್ಯ ಶಿಕ್ಷಕ ಗೋದಾರಿ ರಾಮ್ವೃಕ್ಷ್ ಪಸ್ವಾನ್(40) ಅವರು ದೂರು ನೀಡಿದ್ದಾರೆ. ತಮ್ಮ ದೂರಿನಲ್ಲಿ, ‘ಸೋಮವಾರ ಸುಮಾರು 150 ಬೆಂಬಲಿಗರೊಂದಿಗೆ ಶಾಲೆ ಬಳಿ ಬಂದ ಯಾದವ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಶಾಲೆಯ ಎಲ್ಲಾ ತರಗತಿಗಳಿಗೂ ಏಕಾಏಕಿ ನುಗ್ಗಿ, ಶಿಕ್ಷಕರಿಗೆ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ’ ಎಂದು ತಿಳಿಸಿದ್ದಾರೆ.