ದೇಶದಲ್ಲಿ ಪರಂಪರಾಗತವಾಗಿ ಬಂದಿರುವ ಖಾದಿ ಮತ್ತು ಕೈಮಗ್ಗದಂಥ ಗುಡಿ ಕೈಗಾರಿಕಾ ಉತ್ಪನ್ನಗಳನ್ನು ಜಿ.ಎಸ್.ಟಿ. ವ್ಯಾಪ್ತಿಗೆ ತಂದಿರುವುದು ಸರಿಯಲ್ಲ. ದೇಶದ ಹಳ್ಳಿ ಹಳ್ಳಿಗಳಲ್ಲಿ ಶ್ರಮದ ಕಸುಬು ಮತ್ತು ಗುಡಿ ಕೈಗಾರಿಕೆಗಳನ್ನೇ ಅವಲಂಬಿಸಿರುವವರಿಗೆ ಜಿ.ಎಸ್.ಟಿ. ಒಂದು ಶಾಪವಾಗಿ ಪರಿಣಮಿಸಲಿದೆ ಎನ್ನುವುದು ಪ್ರಸನ್ನ ಅವರ ಲೇಖನದಿಂದ ಮನದಟ್ಟಾಗುತ್ತದೆ. ತೆರಿಗೆ ಹೆಚ್ಚಾದರೆ ಇಂಥ ಉತ್ಪನ್ನಗಳಿಗೆ ಬೇಡಿಕೆಯೇ ಇಲ್ಲವಾಗುತ್ತದೆ. ಪರಿಣಾಮ ನಮ್ಮ ರೈತರು ಮತ್ತು ಬಡ ಕುಶಲಕರ್ಮಿಗಳು ಖಂಡಿತವಾಗಿಯೂ ಸಂಕಷ್ಟಕ್ಕೆ ಒಳಗಾಗುತ್ತಾರೆ.