ಕಾಶ್ಮೀರಿ ಪಂಡಿತರು ತಮ್ಮ ನೆಲದಲ್ಲೇ ನಿರಾಶ್ರಿತರಾದಾಗ ಇವರೆಲ್ಲಾ ಎಲ್ಲಿದ್ದರು? ಅವರೂ ಮನುಷ್ಯರಲ್ಲವೇ? ಇಂದಿಗೂ ಪಂಡಿತರು ಒಂದು ನೆಲೆ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಇಂದು ಆಶ್ರಯ ಬಯಸಿ ಬರುವ ರೋಹಿಂಗ್ಯಾ ಮುಸ್ಲಿಮರು ನಾಳೆ ಸಾಮಾನ ನಾಗರಿಕ ಸೌಲಭ್ಯಗಳು, ತದನಂತರ ವಿಶೇಷ ಸವಲತ್ತುಗಳಿಗೆ ಬೇಡಿಕೆ ಇಡುತ್ತಾರೆ. ಮುಂದಿನ ದಿನಗಳಲ್ಲಿ ವೋಟ್ ಬ್ಯಾಂಕ್ ಆಗಿ ಪರಿಗಣಿತವಾಗುವ ಇವರನ್ನೆಲ್ಲಾ ರಾಜಕೀಯ ಪಕ್ಷಗಳು ತುಷ್ಟೀಕರಿಸಲು ಮುಂದಾಗಿ ದೇಶದ ಹಿತಾಸಕ್ತಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ.