ರಾಜ್ಯ, ರಾಷ್ಟ್ರ, ಸಮುದಾಯಗಳ ಹೆಸರಿನಲ್ಲಿ ವೋಟುಗಳನ್ನು ಹಿಡಿದಿಟ್ಟುಕೊಳ್ಳುವುದೇ ಪರಮ ಧ್ಯೇಯವಾದ ಪುಂಡರ ರಾಜಕೀಯದಲ್ಲಿ, ಸಂಸ್ಕೃತಿ-ಸಂಪನ್ನತೆಗಳನ್ನು ಹುಡುಕುವುದು ಸಾಧ್ಯವಿಲ್ಲವೆನ್ನುವುದಕ್ಕೆ ‘ಕನ್ನಡಿಗರಿಗೆ ಮೀಸಲಾತಿ’ ಒಂದು ಹೊಸ ಉದಾಹರಣೆ. ರಾಜ್ಯವೆಂಬ ಘಟಕಕ್ಕೆ ಸಾಂಸ್ಕೃತಿಕ ವೈಶಿಷ್ಟ್ಯವೇ ಆಧಾರ. ಸಂಸ್ಕೃತಿಯನ್ನು ಪ್ರತಿನಿಧಿಸುವುದು ಭಾಷೆ. ಭಾಷಾವಾರು ಪ್ರಾಂತ ರಚನೆಯ ಉದ್ದೇಶವೇ ಇದು ಎನ್ನುವುದು ವಿದ್ಯಾವಂತರಿಗೆ ಅರ್ಥವಾಗುವ ಸಂಗತಿ. ರಾಜಕೀಯ ಆಡಳಿತಗಾರರಲ್ಲಿ ವಿದ್ಯಾಸಂಸ್ಕಾರ ಹುಡುಕುವುದೆಲ್ಲಿ?