ಆಕಾರ್ ಪಟೇಲ್ ಅವರ ‘ನಿರಾಶ್ರಿತರು ಎಂಬ ವಲಸಿಗರನ್ನು ಕಾಣುವ ಬಗೆ’ ಲೇಖನ (ಪ್ರ.ವಾ., ಸೆ.18) ನಿರಾಶ್ರಿತರ ಸಮಸ್ಯೆಗಳ ಮೇಲೆ ಹೊಸ ಬೆಳಕು ಚೆಲ್ಲಿದೆ. ಮ್ಯಾನ್ಮಾರ್ನಂಥ ರಾಷ್ಟ್ರದಿಂದ ರೋಹಿಂಗ್ಯಾ ಮುಸ್ಲಿಂ ಸಮುದಾಯ ನಮ್ಮ ದೇಶವನ್ನು ಆಶ್ರಯಿಸಿ ಬಂದರೆ, ಅವರ ಸಂಕಷ್ಟಗಳು ನಮ್ಮ ದೇಶದ ಮುಸ್ಲಿಮರಿಗೆ ಮಾತ್ರ ಯಾಕೆ ಅರ್ಥ ಆಗುತ್ತವೆ? ಇವರಿಗೆ ದೇಶದಲ್ಲಿ ಆಶ್ರಯ ನೀಡಬೇಕು ಎಂದು ಈಚೆಗೆ ಬೆಳಗಾವಿ, ಗೋಕಾಕದಂತಹ ಊರುಗಳಲ್ಲಿ ಕೆಲ ಮುಸ್ಲಿಮರು ಪ್ರತಿಭಟನೆ ನಡೆಸುತ್ತಿರುವುದನ್ನು, ನಿರಾಶ್ರಿತರ ಬಗ್ಗೆ ಅವರ ಕಳಕಳಿಯನ್ನು ಕಂಡು ಸಂತಸವೆನಿಸಿತು. ಅಂತೆಯೇ ಈ ಕಾಳಜಿ ಮುಸ್ಲಿಮರಿಗೆ ಮಾತ್ರ ಸೀಮಿತವಾಗಿದ್ದನ್ನು ನೋಡಿ ಬೇಸರವೆನಿಸಿತು.