ಮೂಲತಃ ರೋಮನ್ ಕ್ಯಾಥೊಲಿಕ್ ಕ್ರೈಸ್ತರಾಗಿರುವ ಯೇಸುದಾಸ್ ಅವರು, ಮನವಿ ಹಾಗೂ ತಾವು ಹಿಂದು ಧರ್ಮದಲ್ಲಿ ನಂಬಿಕೆ ಇರಿಸಿರುವ ಘೋಷಣಾ ಪತ್ರವನ್ನು ಸಹಾಯಕರ ಮೂಲಕ ದೇಗುಲಕ್ಕೆ ತಲುಪಿಸಿದ್ದರು. ಪತ್ರದಲ್ಲಿ ಉಲ್ಲೇಖಿಸದೆ ಇದ್ದರು ಸಹ, ಯೇಸುದಾಸ್ ಅವರು ಸೆಪ್ಟೆಂಬರ್ 30ರ ವಿಜಯದಶಮಿಯಂದು ಪದ್ಮನಾಭ ಸ್ವಾಮಿ ದೇಗುಲಕ್ಕೆ ಭೇಟಿ ನೀಡಲು ಬಯಸಿದ್ದಾರೆ ಎಂದು ಸಹಾಯಕ ತಿಳಿಸಿದ್ದರು.