ಅನ್ನಸಂತರ್ಪಣೆ: ರಾಜ್ಯದ ವಿವಿಧೆಡೆ ನಡೆಯುವ ಜಾತ್ರೆ ಹಾಗೂ ಉತ್ಸವಗಳಿಗೆ ಭಕ್ತರಿಗೆ ಸಿಹಿ ಅಡುಗೆ ಅನ್ನಸಂತರ್ಪಣೆ ಮಾಡಿಸುವುದು ಸಾಮಾನ್ಯ. ಆದರೆ, ಇಲ್ಲಿ ಸ್ವಾಮಿಗೆ ಇಷ್ಟವಾದ ಹಾಗೂ ಜಿಲ್ಲೆಯ ಜನರಿಗೆ ಪ್ರಿಯವಾದ ರಾಗಿ ಮುದ್ದೆ, ಹುಳಿಸೊಪ್ಪು ಸಾಂಬಾರ್ ತಯಾರಿಸಿ ಅನ್ನಸಂತರ್ಪಣೆ ಏರ್ಪಡಿಸಿದ್ದು ವಿಶೇಷವಾಗಿತ್ತು.