ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಾಫೀಸ್‌ ಗೆಲುವು ಯಾರದು?

Last Updated 20 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮಾಲಿವುಡ್‌ನ ವಿಚ್ಛೇದಿತ ದಂಪತಿ ದಿಲೀಪ್‌ ಮತ್ತು ಮಂಜು ವಾರಿಯರ್‌ ನಿಜಜೀವನದಲ್ಲಿ ದೂರವಾಗಿದ್ದರೂ ಬಾಕ್ಸಾಫೀಸ್‌ನಲ್ಲಿ ಸಮರ ನಡೆಸುವ ಸಾಧ್ಯತೆಗಳು ನಿಚ್ಚಳವಾಗಿವೆ.

ದಿಲೀಪ್‌ ನಟಿಸಿರುವ ಬಹುನಿರೀಕ್ಷೆಯ ‘ರಾಮಲೀಲಾ’ ಎರಡು ತಿಂಗಳ ಹಿಂದೆಯೇ ಬಿಡುಗಡೆಗೆ ಸಿದ್ಧವಾಗಿತ್ತು. ಆದರೆ ದಿಲೀಪ್‌ ಬಂಧನದ ಕಾರಣ ಸಿನಿಮಾದ ಮೇಲೆ ಕರಿಛಾಯೆ ಬೀಳಬಾರದು ಎಂಬ ಕಾರಣದಿಂದ ನಿರ್ದೇಶಕ ಅರುಣ್‌ ಗೋಪಿ ದಿನಾಂಕವನ್ನು ಮುಂದೂಡಿದ್ದರು. ಆದರೆ ನಿರ್ವಿಘ್ನವಾಗಿ ತೆರೆ ಕಾಣಲು ಸಿದ್ಧವಾಗಿರುವ ಮಂಜು ವಾರಿಯರ್‌ ಅಭಿನಯದ ಚಿತ್ರ ‘ಉದಾಹರಣಮ್‌ ಸುಜಾತ’ ಮತ್ತು ‘ರಾಮಲೀಲಾ’ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ದಿಲೀಪ್‌ ಸದ್ಯದಲ್ಲೇ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಾರೆ ಎನ್ನಲಾಗಿದೆ. ನಿಜ ಜೀವನದಲ್ಲಿ ಮನಸ್ತಾಪದಿಂದಾಗಿ ದೂರವಾಗಿರುವ ಪತಿ ಪತ್ನಿಯ ಮಧ್ಯೆ ಅಭಿಮಾನಿಗಳು ಯಾರ ಕೈಹಿಡಿಯುತ್ತಾರೆ ಎಂದು ಕಾದುನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT