ದಿಲೀಪ್ ನಟಿಸಿರುವ ಬಹುನಿರೀಕ್ಷೆಯ ‘ರಾಮಲೀಲಾ’ ಎರಡು ತಿಂಗಳ ಹಿಂದೆಯೇ ಬಿಡುಗಡೆಗೆ ಸಿದ್ಧವಾಗಿತ್ತು. ಆದರೆ ದಿಲೀಪ್ ಬಂಧನದ ಕಾರಣ ಸಿನಿಮಾದ ಮೇಲೆ ಕರಿಛಾಯೆ ಬೀಳಬಾರದು ಎಂಬ ಕಾರಣದಿಂದ ನಿರ್ದೇಶಕ ಅರುಣ್ ಗೋಪಿ ದಿನಾಂಕವನ್ನು ಮುಂದೂಡಿದ್ದರು. ಆದರೆ ನಿರ್ವಿಘ್ನವಾಗಿ ತೆರೆ ಕಾಣಲು ಸಿದ್ಧವಾಗಿರುವ ಮಂಜು ವಾರಿಯರ್ ಅಭಿನಯದ ಚಿತ್ರ ‘ಉದಾಹರಣಮ್ ಸುಜಾತ’ ಮತ್ತು ‘ರಾಮಲೀಲಾ’ ಏಕಕಾಲಕ್ಕೆ ಬಿಡುಗಡೆಯಾಗಲಿದೆ.