ಬಸವಕಲ್ಯಾಣ: ತಾಲ್ಲೂಕಿನ ಗೋರಟಾ(ಬಿ) ಗ್ರಾಮದಲ್ಲಿನ ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಹುತಾತ್ಮರಾದವರ ನೆನಪಿಗಾಗಿ ನಿರ್ಮಿಸುತ್ತಿರುವ ಸ್ಮಾರಕದ ಕೆಲಸ ಪೂರ್ಣಗೊಳಿಸಬೇಕು.
ಇದರ ಕಟ್ಟಡ ಕಾರ್ಯ ಎರಡು ವರ್ಷಗಳಿಂದ ಕುಂಟುತ್ತ ಸಾಗಿದೆ. ದೀಪಸ್ತಂಭ ಮತ್ತು ಧ್ವಜಸ್ತಂಭ ಅಳವಡಿಸಲಾಗಿದ್ದು ಸರ್ದಾರ ವಲ್ಲಭಭಾಯಿ ಪಟೇಲ್ ಪ್ರತಿಮೆ ಸ್ಥಾಪನೆಗೆ ಕಟ್ಟೆ ನಿರ್ಮಿಸಿದ್ದರೂ ಮೂರ್ತಿ ಸ್ಥಾಪಿಸಿಲ್ಲ. ಇತರೆ ಕಾಮಗಾರಿ ಕೂಡ ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಡಾ.ರಾಜಶೇಖರ ಸ್ವಾಮೀಜಿ,
ಗೋರಟಾ