ಕಲಬುರ್ಗಿ: ಕೇಂದ್ರ ಮಾನವ ಸಂಪನ್ಮೂಲ ಸಚಿವ, ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ ಜಾವಡೇಕರ್ ಅವರು ಸೆ.21ರಿಂದ 23ರ ವರೆಗೆ ಹೈದರಾಬಾದ್ ಕರ್ನಾಟಕದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ವಿವಿಧ ಜಿಲ್ಲೆ ಮತ್ತು ತಾಲ್ಲೂಕುಗಳಿಗೆ ಅವರು ಭೇಟಿ ನೀಡುವರು. ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಭೇಟಿಯಾಗುವರು.
ಸೆ.21ರಂದು ಹೈದರಾಬಾದ್ನಿಂದ ಬಂದು ಬೆಳಿಗ್ಗೆ 10ಕ್ಕೆ ಹುಮನಾಬಾದ್ನಲ್ಲಿ ಬಿಜೆಪಿ ಬೀದರ್ ಜಿಲ್ಲಾ ಕೋರ್ ಕಮಿಟಿ ಸಭೆ ನಡೆಸುವರು.
ನಂತರ 11.30ರಿಂದ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳುವರು. ಸಂಜೆ 4ಕ್ಕೆ ಕಲಬುರ್ಗಿಗೆ ಬರುವರು. 5ಕ್ಕೆ ಕಲಬುರ್ಗಿ ಗ್ರಾಮೀಣ ಮತ್ತು ನಗರ ಜಿಲ್ಲಾ ಘಟಕದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಭಾಗವಹಿಸುವರು.
ಸಂಜೆ 7ಕ್ಕೆ ಇಲಾಖೆಯ ಸಭೆ, ರಾತ್ರಿ 8.30ಕ್ಕೆ ಕಲಬುರ್ಗಿ ನಗರ ಮತ್ತು ಗ್ರಾಮೀಣ ಬಿಜೆಪಿ ಘಟಕಗಳ ಕೋರ್ ಕಮಿಟಿ ಸಭೆ ನಡೆಸುವರು. ಸೆ.22ರಂದು ಬೆಳಿಗ್ಗೆ 9.45ಕ್ಕೆ ಯಾದಗಿರಿ ಜಿಲ್ಲೆ ಶಹಾಪುರದಲ್ಲಿ ಯಾದಗಿರಿ ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸುವರು.
ನಂತರ ಯಾದಗಿರಿ ಜಿಲ್ಲಾ ಕಾರ್ಯಕರ್ತರ ಸಭೆ ನಡೆಸಿ, ರಾಯಚೂರು ಜಿಲ್ಲೆ ಸಿಂಧನೂರಿಗೆ ತೆರಳುವರು. ಸಂಜೆ 4ಕ್ಕೆ ಸಿಂಧನೂರಲ್ಲಿ ರಾಯಚೂರು ಜಿಲ್ಲಾ ಕಾರ್ಯಕರ್ತರ ಸಭೆ,6.30ಕ್ಕೆ ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿ, ಬಳ್ಳಾರಿಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.