‘ಶಾಲಾ-ಕಾಲೇಜು ವಿದ್ಯಾರ್ಥಿಗಳು ಕೆಸರಿನಲ್ಲಿಯೇ ನಡೆದುಕೊಂಡು ಹೋಗುವ ದುಃಸ್ಥಿತಿಯಿದ್ದು, ಎರಡು ದಿನಗಳ ಹಿಂದೆ ನಿಂಗಮ್ಮ ಎನ್ನುವ ಮಹಿಳೆ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದಾರೆ. ರಸ್ತೆ ಸುಧಾರಣೆ ಮಾಡುವಂತೆ ಹಲವಾರು ಬಾರಿ ನಗರಸಭೆ ಅಧ್ಯಕ್ಷರಿಗೆ ಹಾಗೂ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ವಾರ್ಡ್ ನಿವಾಸಿಗಳಾದ ಶಂಕರರಾವ್, ಚನ್ನಾರೆಡ್ಡಿ, ವಿರೂಪಾಕ್ಷಿ ಆರೋಪಿಸಿದ್ದಾರೆ.