‘ಜಾತಿಭೇದ ಇಲ್ಲ, ಜಗಳನೂ ಇಲ್ಲ, ಗಾಳಿ ಕೊಡ್ತೀರಾ, ಇಲ್ಲೇ ಹುಟ್ಟಿ ಇಲ್ಲೇ ಸಾಯ್ತೀರಾ. ಆದರೆ ನಾವು ಮನುಷ್ಯರು ನಡಿಯೋಕೆ ಕಾಲ್ ಇದೆ ಅಂತ ಹೊಯ್ತಾ ಇರ್ತಿವೀ’ ಹೀಗೆ ಪ್ರಕೃತಿ- ಮನುಷ್ಯನ ನಡುವೆ ಇರುವ ಸರಳ ಸತ್ಯಗಳನ್ನು ತನ್ನದೇ ಆದ ಭಾಷೆಯಲ್ಲಿ ಹೇಳಿಕೊಳ್ಳುತ್ತಾ ನಮ್ಮ ನಿಮ್ಮ ನಡುವೆ ಬದುಕುತ್ತಿರುವವನು ‘ಹುಲಿರಾಯ’.