ನಮ್ಮ ರಾಜಕೀಯ ಪಕ್ಷಗಳಿಗೆ ಹಗರಣಗಳ ಬಗ್ಗೆ ಮಾತನಾಡುವುದೇ ಮುಖ್ಯವಾಗಿದೆ. ಅಭಿವೃದ್ಧಿ ಬಗ್ಗೆ ಚರ್ಚೆ ಯಾರಿಗೂ ಬೇಡವಾಗಿದೆ. ಹಗರಣಗಳು, ಹತ್ಯೆಗಳು, ಪ್ರತ್ಯೇಕ ಧರ್ಮದ ಬೇಡಿಕೆ... ಇಂಥ ವಿಷಯಗಳ ಮೂಲಕವೇ ರಾಜಕೀಯ ಪಕ್ಷಗಳು ಗುರುತಿಸಿಕೊಳ್ಳುತ್ತಿವೆ.
ಗ್ರಾಮಾಭಿವೃದ್ಧಿ, ಜನಪರ ಯೋಜನೆಗಳ ಅನುಷ್ಠಾನ, ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ ಸಮರ್ಪಕ ಬಳಕೆಯಂಥ ವಿಚಾರಗಳತ್ತ ಯಾರೂ ಗಮನ ಹರಿಸುತ್ತಿಲ್ಲ. ಗ್ರಾಮವಿಕಾಸದ ಕಲ್ಪನೆಯೇ ಮೂಲೆಗುಂಪಾಗಿದೆ.
ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಉಳಿದಿವೆ. ಈಗ ಕೆಲವು ನಾಯಕರು ಸ್ವಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯುವ ಬಗ್ಗೆ ಮಾತನಾಡುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಇವರು ಏನು ಮಾಡಲೂ ಸಿದ್ಧ ಎಂಬುದನ್ನು ಇದು ಸೂಚಿಸುವುದಿಲ್ಲವೇ?
ಮತದಾರರು ಮುಂದಿನ ಚುನಾವಣೆಯಲ್ಲಾದರೂ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿರುವವರನ್ನೇ ಆರಿಸಲಿ. –ಮಿಥುನ್ ಪಿ.ಜಿ., ಉಜಿರೆ