ಕಾನ್ಪುರ: ಇಂಡಿಯಾ ಗ್ರೀನ್ ಮತ್ತು ಇಂಡಿಯಾ ಬ್ಲೂ ತಂಡಗಳ ನಡುವಿನ ದುಲೀಪ್ ಟ್ರೋಫಿ ಪಂದ್ಯ ಮೂರನೇ ದಿನ ಗುರುವಾರ ಕೂಡ ಮಳೆಯಿಂದಾಗಿ ರದ್ದುಗೊಂಡಿದೆ.
ಎರಡನೇ ದಿನ ಕೂಡ ಮಳೆಯಿಂದಾಗಿ ದಿನದಾಟ ರದ್ದುಗೊಂಡಿತ್ತು. ನಾಲ್ಕು ದಿನಗಳ ಪಂದ್ಯದಲ್ಲಿ ಎರಡು ದಿನಗಳ ಪಂದ್ಯ ಮಳೆಗೆ ಆಹುತಿಯಾಗಿದೆ.
ಮೊದಲ ದಿನ ಇಂಡಿಯಾ ಗ್ರೀನ್ ತಂಡ ಬ್ಲೂ ತಂಡವನ್ನು 177 ರನ್ಗಳಿಗೆ ಕಟ್ಟಿಹಾಕಿತ್ತು. ಮಯಂಕ್ ತಿವಾರಿ (78) ಈ ತಂಡದ ಅಧಿಕ ಸ್ಕೋರರ್ ಎನಿಸಿದ್ದರು. ಸುರೇಶ್ ರೈನಾ 40 ರನ್ ದಾಖಲಿಸಿದ್ದರು. ಗ್ರೀನ್ ತಂಡದ ಬೌಲರ್ ಪರ್ವೇಜ್ ರಸೂಲ್ 17 ಓವರ್ಗಳಲ್ಲಿ 70 ರನ್ಗಳಿಗೆ ಐದು ವಿಕೆಟ್ ಕಬಳಿಸಿ ಮಿಂಚಿದ್ದರು.
ಇನಿಂಗ್ಸ್ ಆರಂಭಿಸಿದ್ದ ಗ್ರೀನ್ ತಂಡ ಮೂರು ವಿಕೆಟ್ ಕಳೆದುಕೊಂಡು 100 ರನ್ ದಾಖಲಿಸಿತ್ತು. ಈ ತಂಡ ಆರಂಭಿಕ ಬ್ಯಾಟ್ಸ್ಮನ್ಗಳ ವಿಕೆಟ್ ಕಳೆದುಕೊಂಡಿದೆ. ಮನ್ಪ್ರೀತ್ ಜುನೇಜ ಆರು ರನ್ ದಾಖಲಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.