ದೇವಮಾನವನ ಶಿಫಾರಸು ಮೇರೆಗೆ ಮಹಿಳೆ ನವದೆಹಲಿಯ ಹಿರಿಯ ವಕೀಲರ ಬಳಿ ಕೆಲಸಕ್ಕೆ ಸೇರಿಕೊಂಡಿದ್ದರು. ₹3 ಸಾವಿರ ವೇತನ ಪಡೆಯುತ್ತಿದ್ದರು. ವೇತನವನ್ನು ಆಶ್ರಮಕ್ಕೆ ನೀಡುವಂತೆ ಪೋಷಕರು ತಿಳಿಸಿದ್ದರಿಂದ ರಕ್ಷಾಬಂಧನ ದಿವಸ ಮಹಿಳೆ ಆಶ್ರಮಕ್ಕೆ ತೆರಳಿದ್ದರು. ರಾತ್ರಿ ಆಶ್ರಮದಲ್ಲಿಯೇ ಉಳಿಯಲು ಹೇಳಿದ ದೇವಮಾನವ ಮಹಿಳೆಯನ್ನು ತನ್ನ ಕೊಠಡಿಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಿದ್ದಾರೆ.