ಬೆಂಗಳೂರು: ಐಟಿಐ ಕಾರ್ಖಾನೆ ಬಳಿಯ ಸರ್ವಿಸ್ ರಸ್ತೆಯಲ್ಲಿ ಗುರುವಾರ ಮೊಪೆಡ್ಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಮಲಯಾದ್ರಿ ಮಂಡಲಪೊ(50) ಎಂಬುವರು ಮೃತಪಟ್ಟಿದ್ದಾರೆ.
ಕಮ್ಮನಹಳ್ಳಿ ಸಮೀಪದ ರಾಮಸ್ವಾಮಿಪಾಳ್ಯ ನಿವಾಸಿಯಾದ ಅವರು, ಬೆಳಿಗ್ಗೆ 6ಗಂಟೆ ಸುಮಾರಿಗೆ ಮೊಪೆಡ್ನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಆಗ ಎದುರಿನಿಂದ ಬಂದ ಬಸ್, ಮೊಪೆಡ್ಗೆ ಡಿಕ್ಕಿ ಹೊಡೆಯಿತು.
ಕೆಳಗೆ ಬಿದ್ದು ತೀವ್ರ ಗಾಯಗೊಂಡ ಅವರು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದರು ಎಂದು ಕೆ.ಆರ್.ಪುರ ಸಂಚಾರ ಪೊಲೀಸರು ಹೇಳಿದ್ದಾರೆ.