ಸಹಾಯಕ ತೋಟಗಾರಿಕ ನಿರ್ದೇಶಕ ಎನ್.ರಾಮಮೂರ್ತಿ ಮಾತನಾಡಿ, ‘ಪುಷ್ಪ ಕೃಷಿ ರೈತರಿಗೆ ಆರ್ಥಿಕ ಚೈತನ್ಯ ತರುವ ಬೆಳೆಯಾಗಿದೆ. ಯಾವ ಭೂಮಿಯಲ್ಲಿ ಎಂಥ ಹೂ ಬೆಳೆಯಬಹುದೆನ್ನುವುದನ್ನು ಇಲಾಖೆಯ ತಜ್ಞರ ಸಲಹೆ ಪಡೆದು, ಬೆಳೆದರೆ ಕೈ ರೈತರು ಕೈಸುಟ್ಟುಕೊಳ್ಳುವುದು ತಪ್ಪುತ್ತದೆ. ಉತ್ತಮ ಸಸಿ, ಸಕಾಲಕ್ಕೆ ಬೇಸಾಯ ಮಾಡುವುದರಿಂದ ಉತ್ತಮ ಫಸಲು ಬರುತ್ತದೆ’ ಎಂದರು.