ಬೆಂಗಳೂರು: ರಾಮನ್ ಮತ್ತು ರಾಜೇಶ್ವರಿ ಸಂಶೋಧನಾ ಪ್ರತಿಷ್ಠಾನವು ಇದೇ 24ರಂದು ಮಲ್ಲೇಶ್ವರದ ಎಂಇಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ‘ಜ್ಯೋತಿಷ್ಯ ಮತ್ತು ಪ್ರಸ್ತುತ ರಾಜಕೀಯ’ ಎಂಬ ವಿಚಾರಗೋಷ್ಠಿ ಆಯೋಜಿಸಿದೆ.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜ್ಯೋತಿಷಿ ಸುಪ್ರಜಾ ರಾಮನ್, ’ರಾಜಕೀಯದ ಮೇಲೆ ಜ್ಯೋತಿಷ್ಯ ಹೇಗೆ ಪ್ರಭಾವ ಬೀರುತ್ತದೆ ಎಂಬ ಬಗ್ಗೆ ಈ ಗೋಷ್ಠಿ ಬೆಳಕು ಚೆಲ್ಲುತ್ತದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾರ ರಾಜಕೀಯ ಭವಿಷ್ಯ ಹೇಗಿದೆ ಎಂಬುದನ್ನು ವಿಶ್ಲೇಷಿಸಲಾಗುತ್ತದೆ’ ಎಂದರು.
‘ಜ್ಯೋತಿಷ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ ಬಿ.ವಿ. ರಾಮನ್ ಅವರ 105ನೇ ಜನ್ಮ ದಿನಾಚರಣೆ ಪ್ರಯುಕ್ತ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.