‘ಪ್ರಾದೇಶಿಕ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಗಿರಿಜನರು, ಆದಿವಾಸಿಗಳ ಬದುಕನ್ನು ಈ ಪೀಳಿಗೆಯ ಜನರಿಗೆ ಕಟ್ಟಿಕೊಡುವ ಆಶಯದೊಂದಿಗೆ ಪರಿಷತ್ತು ಈ ಕಾರ್ಯಕ್ಕೆ ಕೈಹಾಕಿದೆ. ಪ್ರತಿಕೃತಿಗಳ ನಿರ್ಮಾಣದ ಮೂಲಕ ಗಿರಿಜನರ ಬದುಕನ್ನು ಪ್ರವಾಸಿಗರ ಕಣ್ಮುಂದೆ ತರುವ ಯೋಚನೆ ಇದೆ. ಇದಕ್ಕಾಗಿ ಒಟ್ಟು ₹5 ಕೋಟಿ ವೆಚ್ಚ ಅಂದಾಜಿಸಲಾಗಿದ್ದು, ಅನುದಾನ ಕೋರಿ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.