ಗ್ರಾಮಕ್ಕೆ ವಿದ್ಯುತ್ ಬಂದಿದ್ದೇ 15–20 ವರ್ಷದ ಹಿಂದೆ. ಆದರೆ ಈಗ ಕರೆಂಟ್ ಕಂಬಗಳು ಗ್ರಾಮಸ್ಥರಲ್ಲಿ ಭಯ ಹುಟ್ಟಿಸುತ್ತಿವೆ. ಕಂಬದಿಂದ ಮನೆಗಳಿಗೆ ಎಳೆದುಕೊಂಡಿರುವ ತಂತಿಗಳು ಕೂಡ ಶಿಥಿಲವಾಗಿದ್ದು, ಗಾಳಿ ಮಳೆಗೆ ಕಂಬ ಉರುಳಿ ಬಿದ್ದರೆ ಅಪಾಯ ಖಚಿತ ಎಂದು ಗ್ರಾಮ ಪಂಚಾಯ್ತಿ ಸದಸ್ಯರಾದ ಪಾಂಡುರಂಗಪ್ಪ, ಕರಿಯಪ್ಪ, ಚಂದ್ರಪ್ಪ, ಗೋವಿಂದರಾಜು ಹೇಳುತ್ತಾರೆ.