1950ರ ದಶಕ ಕನ್ನಡ ಚಳುವಳಿಯ ಒಂದು ಮುಖ್ಯ ಘಟ್ಟ. ಕಾದಂಬರಿ ಸಾರ್ವಭೌಮ ಅನಕೃ, ರಾಮಮೂರ್ತಿ, ನಾಡಿಗೇರ ಕೃಷ್ಣರಾವ್, ತರಾಸು, ಮೈಸೂರು ಶೇಷಗಿರಿರಾವ್ ಇವರ ಭಾಷಣ ಆಲಿಸಲು ಹೋಗುತ್ತಿದ್ದೆ. ಅನಕೃರವರ ಭಾಷಣ ಗಂಗಾಸಲಿಲದಂತೆ ಹರಿದುಬರುತ್ತಿತ್ತು. ಆಗಿನ ಬೆಂಗಳೂರಿಗೂ ಈಗಿನ ಬೆಂಗಳೂರಿಗೂ ಅಜಗಜಾಂತರ ವ್ಯತ್ಯಾಸವಿದೆ. ಮಿತ ಆದಾಯದ ಆ ಬದುಕು ಆನಂದಮಯವಾಗಿತ್ತು. ಈಗ ಇಂದ್ರಲೋಕದ ಸೌಖ್ಯವಿದ್ದರೂ ಮನಃಶಾಂತಿ ಇಲ್ಲ.