₹ 275 ಕೋಟಿ ವೆಚ್ಚದಲ್ಲಿ ಹೊರ ವರ್ತುಲ ರಸ್ತೆ ನಿರ್ಮಾಣ ಎಂದು ಸರ್ಕಾರ ಹೇಳಿದೆ. ಅದರಿಂದ ಆಚೆಯಾದರೂ ಹಸಿರು ಬೆಲ್ಟ್ ಇರಬೇಕು. ಹೊಸ ಲೇಔಟ್ಗಳು ಹುಟ್ಟಬಾರದು. ವರ್ತುಲದೊಳಗಿನ ಸಿಟಿ ಸಮಗ್ರವಾಗಿರಬೇಕು. ಮತ್ತೆ ಅಗೆ, ಒಡೆ, ಎಳಿ–ಬೀಳಿಸು, ವಿಸ್ತರಿಸು, ಸ್ಲಮ್ಮು... ಎಲ್ಲಾ ಅರೆಬರೆ. ಬೆಲ್ಟ್ ಕಿತ್ತು ಹೊಟ್ಟೆಯೂ ಒಡೆಯಿತು ಎಂದಾಗಬಾರದು. ಇಲ್ಲದಿದ್ದರೆ ಸ್ಮಾರ್ಟ್ ಹಳ್ಳಿಗಳೂ ಏಳವು, ಸಿಟಿಗಳು ಸ್ಮಾರ್ಟೂ ಆಗವು. ವ್ಯರ್ಥ ಖರ್ಚು, ಜನತೆಗೆ ಅನ್ಯಾಯ, ‘ಹಣ ಲಪಟಾಯಿಸುವ ತಂತ್ರ’ ಎಂದು ಜನರು ಭಾವಿಸುವಂತಾಗುತ್ತದೆ. ಸರ್ಕಾರಗಳಿಂದ ಜನರಿಗೆ ಏನು ಸಂದೇಶ ರವಾನೆಯಾಗುತ್ತಿದೆ. ಬಿಟ್ಟಿ ಅಕ್ಕಿ, ಔಷಧ ಇತ್ಯಾದಿಗಳು ಉದ್ಧಾರದ ದಾರಿಗಳೇ?