ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಸಾರ್ಟ್‌ಗೆ ಟಿ.ಟಿ.ವಿ ದಿನಕರನ್‌ ಭೇಟಿ, ಸಭೆ

Last Updated 22 ಸೆಪ್ಟೆಂಬರ್ 2017, 19:31 IST
ಅಕ್ಷರ ಗಾತ್ರ

ಸುಂಟಿಕೊಪ್ಪ (ಕೊಡಗು ಜಿಲ್ಲೆ): ತಮಿಳುನಾಡಿನ ಅನರ್ಹಗೊಂಡ 18 ಶಾಸಕರು ತಂಗಿರುವ ಪ್ಯಾಡಿಂಗ್‌ಟನ್‌ ರೆಸಾರ್ಟ್‌ಗೆ ಟಿ.ಟಿ.ವಿ. ದಿನಕರನ್‌ ಶುಕ್ರವಾರ ಭೇಟಿ ಮಾಡಿ ಚರ್ಚಿಸಿದರು.

ಸಭೆಯ ಬಳಿಕ ಅನರ್ಹಗೊಂಡ ಶಾಸಕ ತಂಗ ತಮಿಳ್‌ ಸೆಲ್ವಂ ಮಾತನಾಡಿ, ‘ನಮ್ಮಲ್ಲಿ ಒಡಕು ಮೂಡಿದ್ದು ಅದನ್ನು ಸರಿಪಡಿಸಲು ದಿನಕರನ್‌ ಭೇಟಿ ಮಾಡಿದ್ದಾರೆಂದು ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಮುಂದಿನ ನಮ್ಮ ನಡೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ದಿನಕರ್‌ ರೆಸಾರ್ಟ್‌ಗೆ ಬಂದಿದ್ದಾರೆ’ ಎಂದು ಸ್ಪಷ್ಪಪಡಿಸಿದರು.

‘ಎಐಎಡಿಎಂಕೆ ಪಕ್ಷ ನಮ್ಮದು. ಚಿಹ್ನೆ ಸಹ ನಮಗೇ ಸೇರಬೇಕು. ಪಕ್ಷ ಇಬ್ಭಾಗ ಮಾಡುವ ಅಧಿಕಾರವೂ ಯಾರಿಗೂ ಇಲ್ಲ. 18 ಮಂದಿ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರಿಗೆ ಅಧಿಕಾರ ಇಲ್ಲ’ ಎಂದು ಎಚ್ಚರಿಸಿದರು.

‘ಶನಿವಾರ ಬೆಳಿಗ್ಗೆ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ. ಬಳಿಕ ತೀರ್ಮಾನ ತಿಳಿಸಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT