ಸಭೆಯ ಬಳಿಕ ಅನರ್ಹಗೊಂಡ ಶಾಸಕ ತಂಗ ತಮಿಳ್ ಸೆಲ್ವಂ ಮಾತನಾಡಿ, ‘ನಮ್ಮಲ್ಲಿ ಒಡಕು ಮೂಡಿದ್ದು ಅದನ್ನು ಸರಿಪಡಿಸಲು ದಿನಕರನ್ ಭೇಟಿ ಮಾಡಿದ್ದಾರೆಂದು ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಮುಂದಿನ ನಮ್ಮ ನಡೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ದಿನಕರ್ ರೆಸಾರ್ಟ್ಗೆ ಬಂದಿದ್ದಾರೆ’ ಎಂದು ಸ್ಪಷ್ಪಪಡಿಸಿದರು.