ಜಯನಗರ ಹಾಗೂ ಬನಶಂಕರಿಯಲ್ಲಿರುವ ‘ಆದೀಶ್ವರ’ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಯಲ್ಲಿ ಪವನ್ ಅವರು ₹8 ಲಕ್ಷ ಮೌಲ್ಯದ ವಸ್ತುಗಳನ್ನು ಖರೀದಿಸಿದ್ದರು. ಅದಕ್ಕೆ ಪ್ರತಿಯಾಗಿ ಚೆಕ್ ನೀಡಿದ್ದರು. ಅದನ್ನು ಬ್ಯಾಂಕ್ಗೆ ಹಾಕಿದ್ದಾಗ ಬೌನ್ಸ್ ಆಗಿತ್ತು. ಆ ಸಂಬಂಧ ಮಳಿಗೆಯ ವ್ಯವಸ್ಥಾಪಕರು, ದೂರು ನೀಡಲು ಹೋದಾಗ ಪೊಲೀಸರು ಸ್ವೀಕರಿಸಿರಲಿಲ್ಲ. ಬಳಿಕ ಅವರು ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದರು.