‘ಕಾನೂನು ಪ್ರಕಾರವೇ ಮಳಿಗೆಯನ್ನು ತೆರೆಯಲಾಗಿದೆ. ಅಬಕಾರಿ, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಪರವಾನಗಿ ನೀಡಿದ್ದಾರೆ. ಸಗಟು ಮಾರಾಟ ಬಿಟ್ಟು, ಚಿಲ್ಲರೆ ವ್ಯಾಪಾರ ಮಾಡುತ್ತಿಲ್ಲ. ಬಾರ್ ಸಹ ನಡೆಸುತ್ತಿಲ್ಲ. ಕೆಲವರು ವಿನಾ ಕಾರಣ ತೊಂದರೆ ನೀಡುತ್ತಿದ್ದಾರೆ’ ಎಂದು ‘ಸ್ಕಾಚ್ ಯಾರ್ಡ್’ ಮಳಿಗೆಯ ಮಾಲೀಕ ಸಂಪತ್ ಬೇಸರ ವ್ಯಕ್ತಪಡಿಸಿದರು.