ಸಂಸ್ಕಾರ ಭಾರತಿ ಸಂಘಟನೆ ಕರ್ನಾಟಕ ಕ್ಷೇತ್ರೀಯ ಅಧ್ಯಕ್ಷ ಪ.ರಾ. ಕೃಷ್ಣಮೂರ್ತಿ. ಆಂಧ್ರಪ್ರದೇಶದ ಕೈಂಡ್ನೆಸ್ ಸೊಸೈಟಿ ಅಧ್ಯಕ್ಷ ಮಾಣಿಕ್ಯಲರಾವ್, ಕಮ್ಮವಾರಿ ಸಂಘದ ಅಧ್ಯಕ್ಷ ಜಿ. ರಾಮಕೃಷ್ಣ ಮೊದಲಾದವರೂ ನದಿಯಲ್ಲಿ ಮಿಂದು ಸೂರ್ಯ ನಮಸ್ಕಾರ, ಕುಂಭ ಪೂಜೆ, ಮಹಾ ಗಣಪತಿ ಪೂಜೆ, ಗಂಗಾಜಲ ಪೂಜೆ ಇತರ ವಿಧಿ. ವಿಧಾನಗಳನ್ನು ನೆರವೇರಿಸಿದರು. ಪಟ್ಟಣ ಸೋಪಾನಕಟ್ಟೆ ಮಾತ್ರವಲ್ಲದೆ ದೊಡ್ಡ ಗೋಸಾಯಿ ಘಾಟ್, ಪಶ್ಚಿಮ ವಾಹಿನಿ, ಗಂಜಾಂ ನಿಮಿಷಾಂಬಾ ದೇವಾಲಯ ಇತರೆಡೆಯೂ ಭಕ್ತರು ಪುಣ್ಯ ಸ್ನಾನ ಮಾಡಿದರು.