ಮಹಾಕಾಳಿ ಪಡ್ಪು ನಿವಾಸಿ ಅನ್ವರ್ ಎಂಬುವವರ ಮಗ ಹಾಫಿಲ್ ಮೃತ ಬಾಲಕ. ಈತ ಮಧ್ಯಾಹ್ನ3.30ರ ಸುಮಾರಿಗೆ ರೈಲ್ವೆ ಹಳಿಯ ಇನ್ನೊಂದು ಬದಿಯಲ್ಲಿರುವ ಅಂಗಡಿಯಿಂದ ಚಾಕೊಲೇಟ್ ಖರೀದಿಸಿ, ವಾಪಸು ಮನೆಗೆ ಮರಳುತ್ತಿದ್ದ. ಹಳಿ ದಾಟುತ್ತಿದ್ದ ವೇಳೆ ಮಂಗಳೂರಿನಿಂದ ಕೇರಳ ಕಡೆಗೆ ಹೋಗುತ್ತಿದ್ದ ಎಕ್ಸ್ಪ್ರೆಸ್ ರೈಲಿಗೆ ಸಿಲುಕಿದ್ದಾನೆ.