ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲಿಗೆ ಸಿಲುಕಿ ಬಾಲಕ ಸಾವು

Last Updated 23 ಸೆಪ್ಟೆಂಬರ್ 2017, 12:15 IST
ಅಕ್ಷರ ಗಾತ್ರ

ಮಂಗಳೂರು: ನಗರದ ಜೆಪ್ಪು ಮಹಾಕಾಳಿ ಪಡ್ಪುವಿನಲ್ಲಿ ಶನಿವಾರ ಮಧ್ಯಾಹ್ನ ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಏಳು ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ.

ಮಹಾಕಾಳಿ ಪಡ್ಪು ನಿವಾಸಿ ಅನ್ವರ್ ಎಂಬುವವರ ಮಗ ಹಾಫಿಲ್ ಮೃತ ಬಾಲಕ. ಈತ ಮಧ್ಯಾಹ್ನ3.30ರ ಸುಮಾರಿಗೆ ರೈಲ್ವೆ ಹಳಿಯ ಇನ್ನೊಂದು ಬದಿಯಲ್ಲಿರುವ ಅಂಗಡಿಯಿಂದ ಚಾಕೊಲೇಟ್ ಖರೀದಿಸಿ, ವಾಪಸು ಮನೆಗೆ ಮರಳುತ್ತಿದ್ದ. ಹಳಿ ದಾಟುತ್ತಿದ್ದ ವೇಳೆ ಮಂಗಳೂರಿನಿಂದ ಕೇರಳ ಕಡೆಗೆ ಹೋಗುತ್ತಿದ್ದ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿದ್ದಾನೆ.

ರೈಲು ಬಾಲಕನ ದೇಹವನ್ನು 75 ಮೀಟರ್ ದೂರಕ್ಕೆ ಎಳೆದೊಯ್ದಿದೆ. ಬಾಲಕನ ದೇಹ ಎರಡು ತುಂಡಾಗಿದೆ ಎಂದು ಘಟನೆಯನ್ನು ನೋಡಿದ ಸ್ಥಳೀಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT