ಕಲ್ಕತ್ತದಷ್ಟೇ ಪ್ರಮುಖ ಬಂದರಾಗಿ ಮಂಗಳೂರು- ನಿರ್ಮಾಣ ಖಚಿತವೆಂದು ಸಚಿವ ಡಾ. ರಾವ್; ಎರಡು ಹಂತಗಳಲ್ಲಿ ಅಭಿವೃದ್ಧಿ
(ನಾರಾಯಣಸ್ವಾಮಿ ಅವರಿಂದ)
ನವದೆಹಲಿ, ಸೆ. 23– ಏನೇ ಆದರೂ ಮಂಗಳೂರು ಬಂದರು ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರದ ಸಾರಿಗೆ ಮತ್ತು ನೌಕಾ ಸಾರಿಗೆ ಸಚಿವ ಡಾ. ವಿ.ಕೆ.ಆರ್. ರಾವ್ ಅವರು ಇಂದು ಇಲ್ಲಿ ತಿಳಿಸಿದರು.