ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಳೆದ ತಿಂಗಳು ಗಣಪತಿ ವಿಸರ್ಜನೆ ವೇಳೆ ದಲಿತ ಸಮುದಾಯದವರು ಗಣಪತಿಯನ್ನು ಗ್ರಾಮದ ಸವರ್ಣೀಯರು ವಿಸರ್ಜನೆ ಮಾಡುವುದಕ್ಕೂ ಮೊದಲು ವಿಸರ್ಜನೆಗೆ ಮುಂದಾಗಿದ್ದರು. ಇದನ್ನು ಖಂಡಿಸಿ ದಲಿತ ಯುವಕರು ಹಾಗೂ ಮಹಿಳೆಯರಿಗೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಲಾಗಿದೆ’ ಎಂದು ದೂರಿದರು.