ಸಂಜೆ 3.30ರ ಸಮಯದಲ್ಲಿ ವಿದ್ಯಾರ್ಥಿಗಳು ಪಟ್ಟಣಕ್ಕೆ ಮನೆಪಾಠಕ್ಕೆ ತೆರಳುತ್ತಿದ್ದ ಸಂದರ್ಭ ಕರ್ಕಳ್ಳಿ ಗ್ರಾಮದ ಆಲದ ಮರದ ಹತ್ತಿರ ಘಟನೆ ನಡೆದಿದೆ.
ಜೇನ್ನೊಣಗಳು ದಾಳಿ ಮಾಡಿದ ಸಂದರ್ಭ ವಿದ್ಯಾರ್ಥಿಗಳು ಸೈಕಲ್ ಮತ್ತು ಬ್ಯಾಗ್ಗಳನ್ನು ಸ್ಥಳದಲ್ಲೇ ಬಿಟ್ಟು ಓಡಿದ್ದಾರೆ. ಅದೇ ದಾರಿಯಲ್ಲಿ ತೆರಳುತ್ತಿದ್ದ ರಾಮೇಗೌಡ ಅವರಿಗೂ ಕಚ್ಚಿವೆ. ಉರಿ ತಾಳಲಾರದೆ ನೆಲ್ಲಕ್ಕುರುಳಿದ ಸಂದರ್ಭ ಜೇನ್ನೊಣಗಳು ದಾಳಿ ಮಾಡಿವೆ.
ಸ್ಥಳಕ್ಕೆ ಆಗ್ನಿಶಾಮಕದಳದ ಸಿಬ್ಬಂದಿ ತೆರಳಿ ಗಾಯಾಳುಗಳನ್ನು ರಕ್ಷಿಸಿ, ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾಮೇಗೌಡ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.