ಮಾನವೀಯತೆಯ ದೃಷ್ಟಿಯಲ್ಲಿ ರೊಹಿಂಗ್ಯಾ ನಿರಾಶ್ರಿತರಿಗೆ ಬಾಂಗ್ಲಾದೇಶ ಆಶ್ರಯ ನೀಡಿತ್ತು. ಅದೇ ವೇಳೆ ದೇಶದ ಭದ್ರತೆಯ ವಿಷಯದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳಲು ಸರ್ಕಾರ ತಯಾರಿಲ್ಲ ಎಂದು ಜೂನಿಯರ್ ಟೆಲಿಕಾಂ ಸಚಿವ ತರಾನಾ ಹಲೀಂ ಹೇಳಿದ್ದಾರೆ.ಹೊಸತಾಗಿ ಬಾಂಗ್ಲಾದೇಶಕ್ಕೆ ಬಂದಿರುವ ರೊಹಿಂಗ್ಯಾಗಳಿಗೆ ಬಯೋಮೆಟ್ರಿಕ್ ಕಾರ್ಡ್ ಗಳನ್ನು ನೀಡಿದ ನಂತರವೇ ಈ ನಿಷೇಧ ಹಿಂಪಡೆಯಲಾಗುವುದು ಎಂದಿದ್ದಾರೆ ಹಲೀಂ.