ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಲ್ಲಿ ಕಡಿಮೆ ಕಳ್ಳರು!

ಹೇಳಿಕೆ ಸಮರ್ಥಿಸಿಕೊಂಡ ಕೆ.ಎನ್‌.ರಾಜಣ್ಣ
Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ತುಮಕೂರು: ‘ಕಾಂಗ್ರೆಸ್‌ ಕಳ್ಳರ ಪಕ್ಷ’ ಎಂಬ ತಮ್ಮ ಹೇಳಿಕೆಯನ್ನು ಮಧುಗಿರಿ ಕಾಂಗ್ರೆಸ್‌ ಶಾಸಕ ಕೆ.ಎನ್‌.ರಾಜಣ್ಣ  ಭಾನುವಾರ ಇಲ್ಲಿ ಸಮರ್ಥಿಸಿಕೊಂಡರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2004ರಲ್ಲಿ ಕಾಂಗ್ರೆಸ್‌ ಪಕ್ಷ ಕಳ್ಳರ ಪಕ್ಷವಾಗಿಯೇ ಇತ್ತು. ನನ್ನನ್ನು ಅಂದು ಪಕ್ಷದಿಂದ ಹೊರ ಹಾಕಿದ್ದರು. ಆಗ ಕಳ್ಳರೇ ಪಕ್ಷದಲ್ಲಿ ತುಂಬಿಕೊಂಡಿದ್ದರು. 1998ರಲ್ಲಿ ನಾನು ಗೆದ್ದಿದ್ದರೂ 2004ರಲ್ಲಿ ನನಗೆ ಟಿಕೆಟ್‌ ಕೊಡಲಿಲ್ಲ. ಈಗ ಅವರು ಎಲ್ಲಿ ಹೋಗಿ ಕುಳಿತಿದ್ದಾರೆ ನೋಡಿ’ ಎಂದು ಹೇಳಿದರು.

‘ಈಗ ಎಲ್ಲ ಪಕ್ಷಗಳಲ್ಲಿಯೂ ಕಳ್ಳರೇ ತುಂಬಿಕೊಂಡಿದ್ದಾರೆ. ಆದರೆ ನಮ್ಮ ಪಕ್ಷದಲ್ಲಿ ಕಡಿಮೆ ಕಳ್ಳರಿದ್ದಾರೆ ಅಷ್ಟೇ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT