ಹಿರಿಯ ರಂಗಕರ್ಮಿ ಪ್ರಸನ್ನ ಮಾತನಾಡಿ, ‘ಇದೇ ಮೊದಲ ಬಾರಿಗೆ ಕೈ ಉತ್ಪನ್ನಗಳಾದ ಕೈಮಗ್ಗ, ಕಂಬಳಿ, ಮಡಿಕೆ, ಬೀಡಿ, ಕರಕುಶಲ ವಸ್ತುಗಳಿಗೆ ಕೇಂದ್ರ ಸರ್ಕಾರ ತೆರಿಗೆ ವಿಧಿಸಿದೆ. ಕರ ನಿರಾಕರಿಸುವ ಮೂಲಕ ಪ್ರತಿಭಟನೆಯನ್ನು ನಡೆಸಬೇಕು. ರೈತರು ಮತ್ತು ಕುಶಲ ಕರ್ಮಿಗಳು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಈ ಸತ್ಯಾಗ್ರಹ ದೇಶದ ಪ್ರತಿಯೊಂದು ಭಾಗಕ್ಕೂ ವ್ಯಾಪಿಸಬೇಕು’ ಎಂದರು.