‘ಬಿಬಿಎಂಪಿಯು ಪ್ರತಿ ವಾರ್ಡಿಗೆ ನಿಗದಿಪಡಿಸಿದ ಕಸ ವಿಲೇವಾರಿ ವಾಹನಗಳಿಗಿಂತ ಕಡಿಮೆ ವಾಹನಗಳ ಮೂಲಕ ಗುತ್ತಿಗೆದಾರರು ಕಸ ಸಾಗಿಸುತ್ತಿದ್ದಾರೆ. ಆದರೆ, ಪಾಲಿಕೆಗೆ ಹೆಚ್ಚು ವಾಹನಗಳ ಲೆಕ್ಕ ನೀಡಿ ಬಾಡಿಗೆ ಪಡೆಯುತ್ತಿದ್ದಾರೆ. ಹೀಗಾಗಿ, ಜಿಪಿಎಸ್ ಅಳವಡಿಸಿ ಗುತ್ತಿಗೆದಾರರ ಅಕ್ರಮಕ್ಕೆ ಕಡಿವಾಣ ಹಾಕಬೇಕು’ ಎಂದು ತ್ಯಾಜ್ಯ ನಿರ್ವಹಣಾ ತಜ್ಞರ ಸಮಿತಿಯ ಸದಸ್ಯ ಎನ್.ಎಸ್.ರಮಾಕಾಂತ್ ಒತ್ತಾಯಿಸಿದರು.