ತಾಲ್ಲೂಕಿನ ಮಲಿಕವಾಡ ಗ್ರಾಮದ ರಾಣಿ ಪರಶುರಾಮ ಕೋಳಿ (13), ದರ್ಶನ ಪರಶುರಾಮ ಕೋಳಿ (9), ಪ್ರತೀಕ್ಷಾ ವಿಜಯ ಮಾನೆ (10), ದೀಕ್ಷಾ ವಿಜಯ ಮಾನೆ (9) ಅವರು ದೂಧ್ಗಂಗಾ ನದಿಪಾತ್ರದಲ್ಲಿರುವ ಮಲ್ಲಿಕಾರ್ಜುನ ಹಾಗೂ ಮಸೋಬಾ ದೇವರ ದರ್ಶನ ಪಡೆಯಲು ಹೋದಾಗ ಪಕ್ಕದಲ್ಲಿ ಹರಿಯುವ ದೂಧ್ಗಂಗಾ ನದಿಯಲ್ಲಿ ಕಾಲು ತೊಳೆಯಲು ಹೋದಾಗ ಕಾಲು ಜಾರಿ ಬಿದ್ದು ನೀರಿನ ರಭಸಕ್ಕೆ ಸಿಲುಕಿದ್ದರು.