ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ‘ಹಾಲು ಕರೆಯುವವರು ಹೋದರು, ಅಲ್ಕೋಹಾಲ್ ಕುಡಿಯುವವರು ಇದ್ದಾರೆ’ ಎಂದಾಗ ಜನರು ಶಿಳ್ಳೆ ಹಾಕಿ ನಕ್ಕರು. ‘ಮತದಾನ ಪವಿತ್ರವಾದುದು. ಅದನ್ನು ಮತಧನ ಮಾಡಬೇಡಿ’ ಎಂದು ಪಟ್ಟಣ್ಣಯ್ಯ ಹೇಳಿದಾಗಲೂ ಜನ ಗೊಳ್ ಎಂದರು. ತಮಾಷೆಯಿಂದ ಇಡೀ ಸಭೆ ನಗುವಿನ ಅಲೆಯಲ್ಲಿ ತೇಲುತ್ತಿದ್ದಾಗ ವೇದಿಕೆಯಲ್ಲಿದ್ದ ರಾಷ್ಟ್ರ ಮಟ್ಟದ ಮುಖಂಡರು, ವಿದೇಶಿ ರೈತ ಪ್ರತಿನಿಧಿಗಳು ಮುಖಮುಖ ನೋಡಿಕೊಳ್ಳುತ್ತಿದ್ದರು.