ಆಗ ಕೋರ್ಟ್ನಲ್ಲಿ ಹಾಜರು ಇದ್ದ ಸಚಿವಾಲಯದ ಇನ್ನೊಬ್ಬ ಅಧಿಕಾರಿ, ‘ಕಾರ್ಯದರ್ಶಿಯವರಿಗೆ ಅತೀವ ತುರ್ತಾದ ಕೆಲಸ ಕಾರ್ಯಗಳಿದ್ದು ಕೋರ್ಟ್ಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದರು. ಇದರಿಂದ ಸಿಟ್ಟುಗೊಂಡ ನ್ಯಾಯಮೂರ್ತಿಗಳು ‘ಸರ್ಕಾರದ ಪ್ರತಿಯೊಬ್ಬ ಪ್ರತಿನಿಧಿಯನ್ನು ನೋಡಿಕೊಳ್ಳಲು ಸೇನಾಪಡೆಯ ಒಬ್ಬ ಅಧಿಕಾರಿಯನ್ನು ನಿಯೋಜಿಸಲಾಗುತ್ತದೆ. ಆದರೆ ಕೋರ್ಟ್ ಅನ್ನು ಪ್ರತಿನಿಧಿಸಲು ಮಾತ್ರ ಒಬ್ಬರೇ ಒಬ್ಬ ಅಧಿಕಾರಿ ಇಲ್ಲದೇ ಇರುವುದು ಬಹಳ ವಿಚಿತ್ರ ಎನಿಸುತ್ತದೆ’ ಎಂದರು. ವಿಚಾರಣೆಯನ್ನು ಇದೇ 13 ಕ್ಕೆ ಮುಂದೂಡಿರುವ ಕೋರ್ಟ್ ಸಾಕ್ಷ್ಯಾಧಾರ ಒದಗಿಸಲು ಇನ್ನೊಂದು ಅವಕಾಶ ನೀಡಿದೆ.