ಆಕ್ಟ್ರಾಯ್ ತೆರಿಗೆ ರದ್ದಿಗೆ ಕೇಸ್ಕರ್ ಸಮಿತಿ ಶಿಫಾರಸು
ನವದೆಹಲಿ, ಅ. 15– ಆಕ್ಟ್ರಾಯಿಯಂತಹ ಸ್ಥಳೀಯ ಸುಂಕಗಳನ್ನು ಶೀಘ್ರವೇ ರದ್ದುಪಡಿಸಬೇಕೆಂದು ರಸ್ತೆ ತೆರಿಗೆ ತನಿಖಾ ಸಮಿತಿ ಶಿಫಾರಸು ಮಾಡಿದೆ. ರಸ್ತೆ ಸಾರಿಗೆಯು ಸುಸೂತ್ರವಾಗಿ ನಡೆಯುವುದಕ್ಕೆ ಇದು ಆತಂಕಕಾರಿ ಯಾಗಿರುವುದೇ ಕಾರಣವೆಂದೂ ತಿಳಿಸಿದೆ. ಆಕ್ಟ್ರಾಯಿ ಮತ್ತು ಇತರ ಗಡಿ ಕಟ್ಟೆಗಳ ಸುಂಕದ ಬಗ್ಗೆ ತನಿಖೆ ನಡೆಸಿದ ಬಿ.ವಿ. ಕೇಸ್ಕರ್ ನೇತೃತ್ವದ ಸಮಿತಿಯು ಕೇಂದ್ರ ರಸ್ತೆಸಾರಿಗೆ ಮತ್ತು ನೌಕಾಸಾರಿಗೆ ಖಾತೆಗೆ ಸಲ್ಲಿಸಿದ ತನ್ನ ಮಧ್ಯಂತರ ವರದಿಯಲ್ಲಿ ‘ಆಕ್ಟ್ರಾಯಿ ಹಾಗೂ ಇನ್ನಿತರ ಸುಂಕಗಳು ಲಂಚ ರುಸುವತ್ತುಗಳಿಗೆ ಎಡೆಕೊಡುತ್ತವೆ’ ಎಂದೂ ಹೇಳಿದೆ.