ತಾಜ್ ಮಹಲ್ ಅನ್ನು ದೇಶವಿರೋಧಿಗಳು ನಿರ್ಮಿಸಿದ್ದು. ಹೀಗಾಗಿ ಅದು ಭಾರತೀಯ ಸಂಸ್ಕೃತಿಯ ಬಾಗವಲ್ಲ ಎಂದು ಸೋಮ್ ಹೇಳಿದ್ದರು. ಇದಕ್ಕೆ ಟ್ವಿಟರ್ನಲ್ಲಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿರುವ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ, ‘ದೆಹಲಿಯ ಕೆಂಪುಕೋಟೆಯನ್ನು ನಿರ್ಮಿಸಿದವರೂ ದೇಶವಿರೋಧಿಗಳೇ. ಪ್ರಧಾನಿ ಮೋದಿ ಅಲ್ಲಿ ತ್ರಿವರ್ಣ ಧ್ವಜ ಹಾರಿಸುವುದನ್ನು ನಿಲ್ಲಿಸುತ್ತಾರೆಯೇ? ತಾಜ್ ಮಹಲ್ಗೆ ಭೇಟಿ ನೀಡಬೇಡಿ ಎಂದು ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೇಶದ ಮತ್ತು ವಿದೇಶಿ ಪ್ರವಾಸಿಗರಿಗೆ ಹೇಳಬಲ್ಲರೇ’ ಎಂದು ಪ್ರಶ್ನಿಸಿದ್ದಾರೆ.