ನಿಜವೆಂದರೆ, ಯಾವ ಕೆಲಸವೂ ಕೀಳೆನ್ನದೆ ತಿಳಿದು ಸಮರ್ಪಣೆ–ಸೇವಾ ಭಾವದಿಂದ ಕಾಯಕನಿಷ್ಠೆ ಮೆರೆಯುತ್ತಿರುವ ಆ ಯುವಕರಿಗೆ, ಅವರು ನಮ್ಮ ಮಕ್ಕಳೇ ಆದರೂ, ‘ಶಹಬ್ಬಾಸ್’ ಎನ್ನಬೇಕು, ಅವರಿಗೆ ಕಾಯಕ ಅಭಿಮಾನ ಮೂಡುವಂತೆ ಮಾಡಬೇಕು, ಕೀಳರಿಮೆ ಅಲ್ಲ. ತ್ಯಾಜ್ಯ ಆಹಾರವನ್ನು ಬಿಸಾಕದೆ, ಸಂಗ್ರಹಿಸಿ ಮೂಕಪ್ರಾಣಿಗಳಿಗೆ ಉಪಯೋಗಿಸಬಹುದು, ಅದು ಪುಣ್ಯ ಕಾರ್ಯವೇ.