ರಾಮನಗರ: ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಅಪಘಾತದಲ್ಲಿ ಒಟ್ಟು ಎಂಟು ಜನ ಮೃತಪಟ್ಟಿದ್ದಾರೆ.
ತಾಲ್ಲೂಕಿನ ಸಾಹುಕಾರನ ಪಾಳ್ಯದ ಬಳಿ ಗುರುವಾರ ಹೆದ್ದಾರಿ ಪಕ್ಕದ ಬಸ್ ತಂಗುದಾಣದಲ್ಲಿ ನಿಂತಿದ್ದವರಿಗೆ ಕಾರು ಡಿಕ್ಕಿ ಹೊಡೆದು ಬೆಂಗಳೂರಿನ ಐವರು ಮೃತಪಟ್ಟಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಜಡೇಮಾಯಸಂದ್ರ ಬಳಿಯ ಮುತ್ತುಗನಹಳ್ಳಿ ಗ್ರಾಮದವರಾದ ಕೆಂಪರಾಜು (40), ಅವರ ಮಕ್ಕಳಾದ ಸುಮಾ (7) ಹಾಗೂ ಸಂಜಯ್ (02), ಬೆಂಗಳೂರು ಎಚ್ಕೆವಿಕೆ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಾದ ನವನೀತ್ ಉಪಾಧ್ಯಾಯ (22) ಹಾಗೂ ಸಾಜನ್ಕುಮಾರ್ (22) ಮೃತರು.
ಕಾರು ಕೆರೆಗೆ: ತಾಲ್ಲೂಕಿನಮನಗಾನಹಳ್ಳಿ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದ್ದು ಕನಕಪುರ ತಾಲ್ಲೂಕಿನ ಗೊಟ್ಟಿಗೆಹಳ್ಳಿ ಗ್ರಾಮದ ಚಿದಾನಂದ (24), ಅವರ ಅಕ್ಕನ ಮಕ್ಕಳಾದ ಶಶಾಂಕ್ (6), ಇಂಪನಾ (4) ಮೃತಪಟ್ಟಿದ್ದಾರೆ.