2015 ರ ಸೆಪ್ಟೆಂಬರ್ 27 ರಂದು ಆಗಿನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಸಾಗುವ ರಸ್ತೆಯ ಸಿಗ್ನಲ್ನಲ್ಲಿ ನಿಂತಿದ್ದ ಕಾನ್ಸ್ಟೆಬಲ್ಗೆ ವೇಗವಾಗಿ ಬೈಕ್ನಲ್ಲಿ ಬಂದು ಈತ ಡಿಕ್ಕಿ ಹೊಡೆದಿದ್ದ. ಈ ಘಟನೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೆಟ್ಟಿಲು ಹತ್ತಿತ್ತು.
ಇದೀಗ ಶಿಕ್ಷೆ ಪ್ರಕಟವಾಗಿದ್ದು, ಅದರಂತೆ, ಎಂ.ಎ.ಜಿನ್ನಾ ರಸ್ತೆಯ ಸಿಗ್ನಲ್ನಲ್ಲಿ ರಸ್ತೆ ಸುರಕ್ಷತೆ ಜಾಗೃತಿಯ ಫಲಕವೊಂದನ್ನು ಹಿಡಿದು ಸುಡುವ ಬಿಸಿಲನ್ನೂ ಲೆಕ್ಕಿಸದೆ ಪ್ರತಿ ಶುಕ್ರವಾರ ಎರಡು ಗಂಟೆ ನಿಲ್ಲಬೇಕಾಗಿದೆ. ಈ ಫಲಕದಲ್ಲಿ ‘ವಾಹನ ಸವಾರರೇ ಎಚ್ಚರ. ನಿರ್ಲಕ್ಷ್ಯದಿಂದ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದರೆ ಸಾಯುತ್ತಾರೆ’ ಎಂದು ಬರೆದಿರುತ್ತದೆ. 2018ರ ಅಕ್ಟೋಬರ್ 11 ರವರೆಗೆ ಈತನಿಗೆ ಈ ಶಿಕ್ಷೆ ಜಾರಿಯಲ್ಲಿರುತ್ತದೆ.