‘ಸ್ವಾತಂತ್ರ್ಯ ಪೂರ್ವ ಸಾಕಷ್ಟು ಕೆರೆಗಳನ್ನು ನಿರ್ಮಿಸಲಾಗಿದ್ದು, ಎಂಥ ಅತಿವೃಷ್ಟಿಯನ್ನಾದರೂ ತಡೆಯುತ್ತಿತ್ತು. ಈಗಲೂ ನೀರು ನಿಲ್ಲಿಸಲು ಒಂದು ಕೆರೆಯಿಂದ ಇನ್ನೊಂದು ಕೆರೆಗೆ ಸಂಪರ್ಕ ಕಲ್ಪಿಸಲಾಗಿದೆ. ಚಿತ್ರದುರ್ಗದ ಕೋಟೆಯಲ್ಲಿ ಸುರಿದ ಮಳೆ ನೀರು ಸಿಹಿ ನೀರು ಹೊಂಡ, ಸಂತೇಹೊಂಡ ತಲುಪಿ ಅಲ್ಲಿಂದ ಮಲ್ಲಾಪುರ ಕೆರೆ, ಗೋನೂರು ಕೆರೆ, ಬೊಮ್ಮೇನಹಳ್ಳಿ ಕೆರೆ, ಕಲ್ಲಹಳ್ಳಿ ಕರೆ ನಂತರ ಚಳ್ಳಕೆರೆ ತಾಲ್ಲೂಕಿನ ಕೆರೆಗಳಿಗೆ ಸೇರುತ್ತದೆ’ ಎಂದು ವಿವರಿಸಿದರು.