‘ನನ್ನ ಹಾಗೂ ನನ್ನ ಪತ್ನಿ ಬೆನಜೀರ್ ಭುಟ್ಟೊಗೆ ಷರೀಫ್ ಸಹೋದರರು ಮಾಡಿದ ಮೋಸವನ್ನು ನಾನಿನ್ನೂ ಮರೆತಿಲ್ಲ. ಮೆಮೊಗೇಟ್ ವಿವಾದದಲ್ಲಿ ನನ್ನನ್ನು ತಪ್ಪಿತಸ್ಥನಾಗಿಸಲು ಷರೀಫ್ ನ್ಯಾಯಾಲಯಕ್ಕೆ ಹೋಗಿದ್ದರು. ಅವರಿಗೆ ಸಮಸ್ಯೆ ಎದುರಾದಾಗ ಮಾತ್ರ ಅವರು ನಮ್ಮೊಂದಿಗೆ ಕೈಜೋಡಿಸಲು ಮುಂದೆ ಬರುತ್ತಾರೆ. ಆದರೆ, ಅಧಿಕಾರದಲ್ಲಿದ್ದಾಗ ನಿಮ್ಮನ್ನು ಚಾಣಾಕ್ಷ ರೀತಿಯಲ್ಲಿ ಹಿಂದೆ ಸರಿಸುತ್ತಾರೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.